Job Description: ➤ ಟಿಬೆಟ್ ಹಾಗೂ ನೇಪಾಳದ ಗಡಿಭಾಗದಲ್ಲಿರುವ ರುಸುವಾ ಜಿಲ್ಲೆಯಲ್ಲಿ ಸಂಭವಿಸಿದ ದಿಢೀರ್ ಪ್ರವಾಹ ಹಾಗೂ ಭೂಕುಸಿತದಿಂದಾಗಿ ದೊಡ್ಡ ಮಟ್ಟದ ದುರಂತ ಸಂಭವಿಸಿದೆ. ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ಸಂಭವಿಸಿದ ಈ ಜಲಪ್ರಳಯದಲ್ಲಿ 160ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದು, 800ಕ್ಕೂ ಹೆಚ್ಚು ಮಂದಿ ಕಣ್ಣರೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ಕೈಲಾಸ ಮಾನಸಸರೋವರ ಯಾತ್ರೆಗೆ ತೆರಳಿದ್ದ 133 ಭಾರತೀಯರು ಮತ್ತು 37 ಅನಿವಾಸಿ ಭಾರತೀಯರು (NRI) ಸೇರಿದ್ದಾರೆ.➤ ದುರಂತಕ್ಕೆ ಹಿಮಪಾತ ಹಾಗೂ ಭೂಕಂಪವೇ ಕಾರಣ: ನೇಪಾಳದ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಪ್ಲಾನೆಟ್ ಲ್ಯಾಬ್ಸ್‌ನ ಉಪಗ್ರಹ ಚಿತ್ರಣದ ವಿಶ್ಲೇಷಣೆಯ ಪ್ರಕಾರ, ಟಿಬೆಟ್ ಗಡಿಯ ಲೆಂಡೆ ಖೋಲಾ ನದಿ ಪಾತ್ರದಲ್ಲಿ ಸಂಭವಿಸಿದ ಪ್ರಬಲ ಹಿಮಪಾತ ಹಾಗೂ ಭೂಕಂಪದಿಂದ ದೊಡ್ಡ ಪ್ರಮಾಣದ ಹಿಮಬಂಡೆಗಳು ನದಿಗೆ ಕುಸಿದುಬಿದ್ದಿವೆ. ಇದರಿಂದಾಗಿ ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಭೋಟೆ ಕೋಶಿ ಹಾಗೂ ತ್ರಿಶೂಲಿ ನದಿಗಳಲ್ಲಿ ದಿಢೀರ್ 30 ಅಡಿಗೂ ಎತ್ತರದ ರಾಡಿ ಮಿಶ್ರಿತ ನೀರು ಹರಿದುಬಂದು ಈ ಅನಾಹುತ ಸೃಷ್ಟಿಯಾಗಿದೆ.➤ ಪ್ರಮುಖ ಜಿಲ್ಲೆಗಳಲ್ಲಿ ಆಹಾಕಾರ, ಗ್ರಾಮಗಳೇ ಭಸ್ಮ: ನೇಪಾಳದ ರುಸುವಾ, ನುವಾಕೋಟ್, ಧಾಡಿಂಗ್, ಚಿತ್ವಾನ್, ಗೂರ್ಖಾ, ತನಹುನ್ ಮತ್ತು ನವಲ್ಪರಾಸಿ (ಪೂರ್ವ) ಜಿಲ್ಲೆಗಳಲ್ಲಿ ಭೋಟೆ ಕೋಶಿ ಹಾಗೂ ತ್ರಿಶೂಲಿ ನದಿ ಪ್ರವಾಹ ಅಪಾರ ಹಾನಿ ಉಂಟುಮಾಡಿದೆ. ನದಿಯ ರಭಸಕ್ಕೆ ಸೇತುವೆಗಳು, ಹೈಡ್ರೋ ಪವರ್ ಪ್ರಾಜೆಕ್ಟ್‌ಗಳು, ರಸ್ತೆಗಳು ಹಾಗೂ ಗಡಿ ಭಾಗದ ಹಲವು ಹಿಮಾಲಯನ್ ಹಳ್ಳಿಗಳು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿವೆ.➤ ತುರ್ತು ಹೆಲ್ಪ್‌ಲೈನ್ ಸಂಖ್ಯೆಗಳು ಪ್ರಕಟ: ಘಟನೆಯ ಗಂಭೀರತೆಯನ್ನು ಪರಿಗಣಿಸಿ, ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹಾಗೂ ಕೇಂದ್ರ ವಿದೇಶಾಂಗ ಸಚಿವಾಲಯವು ಪ್ರವಾಹ ಪೀಡಿತ ಯಾತ್ರಿಕರ ಕುಟುಂಬಸ್ಥರ ನೆರವಿಗಾಗಿ ತುರ್ತು ಹೆಲ್ಪ್‌ಲೈನ್ ಸಂಖ್ಯೆಗಳನ್ನು ತೆರೆದಿದೆ. ಭಾರತೀಯ ರಾಯಭಾರ ಕಚೇರಿ ಸಹಾಯವಾಣಿ: +977 985 131 6807 / +977 970 910 7500 ನೇಪಾಳ ಟೂರಿಸ್ಟ್ ಹೆಲ್ಪ್‌ಲೈನ್: 1234 / 1144 ➤ ನೇಪಾಳಿ ಸೇನೆ, ಸಶಸ್ತ್ರ ಪೊಲೀಸ್ ಪಡೆ ಹಾಗೂ ಡ್ರೋನ್, ಹೆಲಿಕಾಪ್ಟರ್‌ಗಳ ಸಹಾಯದಿಂದ ಬೃಹತ್ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಭಾರತೀಯ ವಿದೇಶಾಂಗ ಸಚಿವಾಲಯವೂ ನೇಪಾಳ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ.