ವಿಜಯಪುರ ಜಿಲ್ಲಾ ವ್ಯಾಪ್ತಿಯ ಸಿಂದಗಿ ತಾಲೂಕಿನ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಅನುದಾನಿತ ಹುದ್ದೆಗಳಿಗೆ ಅರ್ಜಿ ಆಹ್ವಾನ
- ಬಿಜಾಪುರ ಜಿಲ್ಲಾ ಆದಿಜಾಂಬವ ಸಾ. ಆ. ಸಾ ಶಿಕ್ಷಣ ಸಂಸ್ಥೆ (ರಿ) ಅಡಿಯಲ್ಲಿ ಸಿಂದಿಗಿ ತಾಲ್ಲೂಕು ಪೈಕಿ ಕೊಂಡಗೂಳಿ ಯಲ್ಲಿ ನಡೆಯುತ್ತಿರುವ ಅನುದಾನಿತ ಶ್ರೀ ಕೇಶಿರಾಜ ಪ್ರೌಢ ಶಾಲೆಯಲ್ಲಿ ನಿವೃತ್ತಿಯಿಂದ ತೆರವಾದ ಅನುದಾನ ಸಹಿತ ಹಿಂದಿ ಶಿಕ್ಷಕ ಹುದ್ದೆಯನ್ನು ಭರ್ತಿಮಾಡಿಕೊಳ್ಳಲು ಮಾನ್ಯ ಆಯುಕ್ತರು ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಇವರ ಆದೇಶ ಸಂಖ್ಯೆ :ಶಾಶಿಆ:ಖಾಹುತುಂ 48:2018-19/3029 ರ ಪ್ರಕಾರ ದಿನಾಂಕ : 16/02/2019 ರಂದು ಅನುಮತಿ ನೀಡಿರುತ್ತಾರೆ. ಈ ಪ್ರಕಾರ ಸಹ ಶಿಕ್ಷಕ ಹುದ್ದೆಗಳನ್ನು ತುಂಬಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
- ಹುದ್ದೆಗಳ ವಿವರ (ಕನ್ನಡ ಮಾಧ್ಯಮ ) :
* ಹಿಂದಿ ಭಾಷೆ ಶಿಕ್ಷಕ - 01
Job Overview
- No. of posts
- 1
- Start Date
- 11 ಆಗಸ್ಟ್ 2021
- End Date
- 31 ಆಗಸ್ಟ್ 2021
- Employment Type
- FULL_TIME
- Organization
- KPSC Vaani (Website)
- Location
- ವಿಜಯಪುರ ಜಿಲ್ಲೆ, KA,
Selection Procedure:
- ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
Qualification:
- ಮಾನ್ಯತೆ ಹೊಂದಿರುವ ಬೋರ್ಡ್/ಸಂಸ್ಥೆಯಿಂದ ಶಿಕ್ಷಣ ವಿಷಯಕ್ಕೆ ಸಂಬಂಧಿಸಿದಂತೆ ಪದವಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು.
Fee:
- ಸಹ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ ಅಭ್ಯರ್ಥಿಗಳು ತಮ್ಮ ಪೂರ್ಣ ವಿವರಗಳೊಂದಿಗೆ ಹಾಗೂ ಅವಶ್ಯಕ ದೃಢೀಕೃತ ದಾಖಲೆಗಳೊಂದಿಗೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ₹ 600 , ಸಾಮಾನ್ಯ ₹ 1000 ರೂಪಾಯಿ ರಾಷ್ಟ್ರೀಕೃತ ಬ್ಯಾಂಕಿನಿಂದ ಡಿಡಿ (DD)ಯನ್ನು ಗೌರವ ಕಾರ್ಯದರ್ಶಿ, ಬಿಜಾಪುರ ಜಿಲ್ಲಾ ಆದಿಜಾಂಬವ ಸಾ. ಆ. ಸಾ ಶಿಕ್ಷಣ ಸಂಸ್ಥೆ (ರಿ) ಕೊಂಡಗೂಳಿ ತಾಲೂಕು : ಸಿಂದಗಿ ಜಿಲ್ಲಾ : ವಿಜಯಪುರ ಇವರ ಹೆಸರಿನಲ್ಲಿ ಪಡೆದು ಅರ್ಜಿ ಸಮೇತ ಸದರಿಯವರ ವಿಳಾಸಕ್ಕೆ ದಿನಾಂಕ: 11/08/2021 ರಿಂದ 31/08/2021 ರ ಇಪ್ಪತ್ತೊಂದು ದಿನಗಳ ಒಳಗಾಗಿ ಅರ್ಜಿಗಳನ್ನು ಕಳುಹಿಸಬೇಕು. ಅರ್ಜಿಯ 1 ಪ್ರತಿಯನ್ನು ಮಾನ್ಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾವೇರಿ ಇವರ ವಿಳಾಸಕ್ಕೆ ಕಳಿಸಬೇಕು.
Related Tags:
Degree
Comments