➤ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ. ಪಿ. ನಡ್ಡಾ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಹಾನಿರ್ದೇಶಕ ಡಾ. ಟೆಡ್ರೋಸ್ ಅಧಾನೊಮ್ ಗೆಬ್ರೇಸಸ್ ಅವರ ನಡುವೆ ನಡೆದ ಪ್ರಮುಖ ಸಭೆಯಲ್ಲಿ ಭಾರತದ ಆರೋಗ್ಯ ಕ್ಷೇತ್ರದ ಪ್ರಗತಿಯನ್ನು ಕೊಂಡಾಡಲಾಗಿದೆ. ತಿಮೋರ್-ಲೆಸ್ಬೆಯ ಡಿಲಿಯಲ್ಲಿ ಆಯೋಜಿಸಲಾಗಿದ್ದ ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ-ಪೂರ್ವ ಏಷ್ಯಾ ಪ್ರಾದೇಶಿಕ ಸಮಿತಿಯ 79ನೇ ಅಧಿವೇಶನದ (WHO Regional Committee - RC79) ವೇಳೆ ಈ ಭೇಟಿ ನಡೆದಿದೆ.➤ ಆಯುಷ್ಮಾನ್ ಆರೋಗ್ಯ ಮಂದಿರಗಳ ಪಾತ್ರ:- ದೇಶಾದ್ಯಂತ ಸ್ಥಾಪಿತವಾಗಿರುವ ಸುಮಾರು 1.6 ಲಕ್ಷ (1,60,000) ಆಯುಷ್ಮಾನ್ ಆರೋಗ್ಯ ಮಂದಿರಗಳ ಮೂಲಕ ಪ್ರಾಥಮಿಕ ಆರೋಗ್ಯ ಸೇವೆಯನ್ನು ಸುಲಭವಾಗಿ ತಲುಪಿಸುತ್ತಿರುವುದನ್ನು ಡಬ್ಲ್ಯೂಎಚ್‌ಒ ಪ್ರಶಂಸಿಸಿದೆ.- ರಕ್ತದೊತ್ತಡ (Hypertension), ಮಧುಮೇಹ (Diabetes) ಹಾಗೂ ವಿವಿಧ ಮಾದರಿಯ ಕ್ಯಾನ್ಸರ್‌ಗಳ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಮಾರ್ಗದರ್ಶನ ನೀಡುವಲ್ಲಿ ಈ ಕೇಂದ್ರಗಳು ಶ್ರಮಿಸುತ್ತಿವೆ.➤ ಆಶಾ (ASHA) ಕಾರ್ಯಕರ್ತೆಯರ ಕೊಡುಗೆ:- ಸ್ಥಳೀಯ ಹಂತದಲ್ಲೇ ತಾಯಂದಿರು ಮತ್ತು ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು "ಆರೋಗ್ಯ ಸೇವೆಯ ತಳಮಟ್ಟದ ಮಾದರಿ" ಎಂದು ಬಣ್ಣಿಸಲಾಗಿದೆ.- ಗರ್ಭಧಾರಣೆಯಿಂದ ಹಿಡಿದು ಮಗುವಿನ ಬೆಳೆವಣಿಗೆಯ ಹಂತದವರೆಗೆ ಆಶಾ ಕಾರ್ಯಕರ್ತೆಯರು ನೀಡುತ್ತಿರುವ ಬೆಂಬಲ ಗಮನಾರ್ಹವಾಗಿದೆ.➤ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಇಳಿಕೆ:- ಭಾರತದಲ್ಲಿ ಸಾಂಸ್ಥಿಕ ಹೆರಿಗೆಗಳ (Institutional Deliveries) ಪ್ರಮಾಣ ಶೇಕಡಾ 78 ರಿಂದ ಶೇಕಡಾ 93 ಕ್ಕೆ ಏರಿಕೆಯಾಗಿದೆ.- ಲಸಿಕಾಕರಣದ ವಿಸ್ತರಣೆ ಮತ್ತು ಸಾಂಸ್ಥಿಕ ಹೆರಿಗೆ ಹೆಚ್ಚಾಗಿದ್ದರಿಂದ ತಾಯಂದಿರ ಮತ್ತು ಮಕ್ಕಳ ಮರಣ ಪ್ರಮಾಣ (Maternal & Child Mortality Rate) ಗಣನೀಯವಾಗಿ ಕಡಿಮೆಯಾಗಿದೆ.➤ ಇತರ ಪ್ರಮುಖ ಚರ್ಚಿತ ವಿಷಯಗಳು:- ಕ್ಷಯರೋಗ ನಿರ್ಮೂಲನೆ (#EndTB) ಅಭಿಯಾನದಲ್ಲಿ ಭಾರತದ ಸಕ್ರಿಯ ಶ್ರಮ.- ಔಷಧೀಯ ಉತ್ಪನ್ನಗಳ (Medical Products) ನಿಯಂತ್ರಣ ಹಾಗೂ ಗುಣಮಟ್ಟ ಕಾಯ್ದುಕೊಳ್ಳುವುದು.- ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ (Traditional Medicine) ಮತ್ತು ಜಾಗತಿಕ ಸಾಂಕ್ರಾಮಿಕ ರೋಗಗಳ ಒಪ್ಪಂದದ (WHO Pandemic Agreement) ಕುರಿತು ಸಹಕಾರ.