➤ ದೇಶದ ವಿವಿಧ ನಗರ ಮತ್ತು ಪಟ್ಟಣಗಳಲ್ಲಿ ಗಾಳಿಯ ಗುಣಮಟ್ಟವನ್ನು ಉತ್ತಮವಾಗಿ ನಿರ್ವಹಿಸಿರುವುದಕ್ಕಾಗಿ ನೀಡಲಾಗುವ ಕೇಂದ್ರ ಸರ್ಕಾರದ ‘5ನೇ ಸ್ವಚ್ಛ ವಾಯು ಸರ್ವೇಕ್ಷಣ ಪ್ರಶಸ್ತಿ’ (Swachh Vayu Survekshan Awards) ಘೋಷಣೆಯಾಗಿದೆ. ಕೇಂದ್ರ ಪರಿಸರ, ಅರಣ್ಯ ಮತ್ತು ವಾಯುಗುಣ ಬದಲಾವಣೆ ಸಚಿವಾಲಯವು ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದ (NCAP) ಭಾಗವಾಗಿ ನೀಡುವ ಈ ಶ್ರೇಯಾಂಕದಲ್ಲಿ, ಕರ್ನಾಟಕದ ಯಾವುದೇ ನಗರ ಅಗ್ರ 10ರ ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿಫಲವಾಗಿದೆ.➤ ಪ್ರಮುಖ ಶ್ರೇಯಾಂಕ ವಿವರಗಳು (ಕರ್ನಾಟಕದ ನಗರಗಳು): ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ವಿವಿಧ ಜನಸಂಖ್ಯೆಯ ಆಧಾರದ ಮೇಲೆ ಈ ಶ್ರೇಯಾಂಕವನ್ನು ವರ್ಗೀಕರಿಸಿದೆ.10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಬೃಹತ್ ನಗರಗಳು:- ರಾಜಧಾನಿ ಬೆಂಗಳೂರು 32ನೇ ಸ್ಥಾನ ಪಡೆದುಕೊಂಡಿದೆ.- 3ರಿಂದ 10 ಲಕ್ಷ ಜನಸಂಖ್ಯೆ ಇರುವ ನಗರಗಳು: - ದಾವಣಗೆರೆ: 11ನೇ ಸ್ಥಾನ- ಹುಬ್ಬಳ್ಳಿ-ಧಾರವಾಡ: 19ನೇ ಸ್ಥಾನ - ಕಲಬುರಗಿ (ಗುಲ್ಬರ್ಗ): 36ನೇ ಸ್ಥಾನ➤ ರಾಜ್ಯದ 3 ವಾರ್ಡ್‌ಗಳಿಗೆ ರಾಷ್ಟ್ರೀಯ/ರಾಜ್ಯ ಮಟ್ಟದ ಗೌರವ: ನಗರಗಳ ಒಟ್ಟಾರೆ ಶ್ರೇಯಾಂಕದಲ್ಲಿ ರಾಜ್ಯ ಹಿನ್ನಡೆ ಅನುಭವಿಸಿದರೂ, ವಾರ್ಡ್‌ ಮಟ್ಟದಲ್ಲಿ ನಡೆಸಿದ ಗಾಳಿಯ ಗುಣಮಟ್ಟ ಜಾಗೃತಿ ಮತ್ತು ಕಸ ವಿಲೇವಾರಿ ಸಾಧನೆಗಾಗಿ ಕರ್ನಾಟಕದ ಮೂರು ವಾರ್ಡ್‌ಗಳಿಗೆ ಪ್ರಶಸ್ತಿ ಲಭಿಸಿದೆ:- 30,000ಕ್ಕೂ ಹೆಚ್ಚು ಜನಸಂಖ್ಯೆ ವಿಭಾಗ: ಬೆಂಗಳೂರಿನ ಕೋರಮಂಗಲ ವಾರ್ಡ್.- 10,000ರಿಂದ 30,000 ಜನಸಂಖ್ಯೆ ವಿಭಾಗ: ದಾವಣಗೆರೆಯ ಒಂದು ವಾರ್ಡ್.- 10,000ಕ್ಕಿಂತ ಕಡಿಮೆ ಜನಸಂಖ್ಯೆ ವಿಭಾಗ: ದಾವಣಗೆರೆಯ ಮತ್ತೊಂದು ವಾರ್ಡ್.➤ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ನಗರಗಳು:10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ವಿಭಾಗ:1. ಪ್ರಥಮ ಸ್ಥಾನ: ಲಖನೌ (ಉತ್ತರ ಪ್ರದೇಶ)2. ದ್ವಿತೀಯ ಸ್ಥಾನ: ಇಂದೋರ್ (ಮಧ್ಯಪ್ರದೇಶ)3. ತೃತೀಯ ಸ್ಥಾನ: ಜಬಲ್ಪುರ್ (ಮಧ್ಯಪ್ರದೇಶ)3 ರಿಂದ 10 ಲಕ್ಷ ಜನಸಂಖ್ಯೆ ವಿಭಾಗ:1. ಪ್ರಥಮ ಸ್ಥಾನ: ರೌರ್ಕೆಲಾ (ಒಡಿಶಾ)