Loading..!

ವಿಜಯಪುರ ಜಿಲ್ಲೆಗೆ ಸೇರಿದ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ

Published by: Mallappa Myageri
|
ವಿಜಯಪುರ ಜಿಲ್ಲೆಗೆ ಸೇರಿದ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಬೋಧಕ ಮತ್ತು  ಬೋಧಕೇತರ ಹುದ್ದೆಗಳ ನೇಮಕಾತಿ
ವಿಜಯಪುರ ಜಿಲ್ಲೆಗೆ ಸೇರಿದ ಪ್ರತಿಷ್ಠಿತ ವಿದ್ಯಾವರ್ಧಕ ಸಂಘದಲ್ಲಿ ಖಾಲಿ ಇರುವ ಬೋಧಕ ಮತ್ತು  ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ.
ಶ್ರೀ ವೀರೇಶ್ವರ ವಿದ್ಯಾವರ್ಧಕ ಸಂಘ, ನಾಲತವಾಡ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಸ್ಥೆಗಳಲ್ಲಿ ಈ ಕೆಳಕಂಡಂತೆ ಹುದ್ದೆಗಳು ಖಾಲಿ ಇವೆ.
ಪ್ರಾಚಾರ್ಯರು, ಮುಖ್ಯೋಪಾಧ್ಯಾಯರು, ಸಹಾಯಕ ಪ್ರಾಧ್ಯಾಪಕರು ಗಣಿತ, ಸಹಾಯಕ ಪ್ರಾಧ್ಯಾಪಕರು ವಿಜ್ಞಾನ, ಸಹಾಯಕ ಪ್ರಾಧ್ಯಾಪಕರು ಇಂಗ್ಲಿಷ್, ಉಪನ್ಯಾಸಕರು ಶಿಕ್ಷಣಶಾಸ್ತ್ರ, ಉಪನ್ಯಾಸಕರು ಇಂಗ್ಲಿಷ್, ಉಪನ್ಯಾಸಕರು ಅರ್ಥಶಾಸ್ತ್ರ, ಉಪನ್ಯಾಸಕರು ವಾಣಿಜ್ಯಶಾಸ್ತ್ರ, ಸಹ ಶಿಕ್ಷಕರು ಕನ್ನಡ, ಸಹ ಶಿಕ್ಷಕರು ಇಂಗ್ಲಿಷ್, ಸಹ ಶಿಕ್ಷಕರು ಹಿಂದಿ, ಸಹ ಶಿಕ್ಷಕರು ವಿಜ್ಞಾನ, ಸಹ ಶಿಕ್ಷಕರು ಗಣಿತ, ಸಹ ಶಿಕ್ಷಕಿಯರು (ಪೂರ್ವ ಪ್ರಾಥಮಿಕ ವಿಭಾಗ) ಪ್ರಥಮ ದರ್ಜೆ ಸಹಾಯಕರು,ಕಂಪ್ಯೂಟರ್ ಆಪರೇಟರ್ & ಸೆಕ್ಯೂರಿಟಿ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕ 08-10-2021 ದೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ದಿನಾಂಕ 10-10-2021ರಂದು ಬೆಳಿಗ್ಗೆ 11:00 ಗಂಟೆಗೆ ಶ್ರೀ ವೀರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಆಕರ್ಷಕ ವೇತನ ನೀಡಲಾಗುವುದು.
Job Overview
No. of posts
25
Start Date
22 ಸೆಪ್ಟೆಂಬರ್ 2021
End Date
10 ಅಕ್ಟೋಬರ್ 2021
Employment Type
FULL_TIME
Organization
KPSC Vaani (Website)
Location
ವಿಜಯಪುರ ಜಿಲ್ಲೆ, KA,
Selection Procedure:
ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುವುದು.
Qualification:
ಪ್ರಾಚಾರ್ಯರು: ಎಂಎ / ಎಂ.ಕಾಂ / ಎಂ.ಎಸ್ಸಿ, ಎಂ.ಇಡಿ, ಕೆ.ಸೆಟ್ / ನೆಟ್ / ಪಿ.ಎಚ್.ಡಿ ಶೇ. 55 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಜೊತೆಗೆ 10 ವರ್ಷಗಳ ಅನುಭವ ಹೊಂದಿರಬೇಕು.

ಸಹಾಯಕ ಪ್ರಾಧ್ಯಾಪಕರು: ಎಂ.ಎ / ಎಂ.ಎಸ್ಸಿ ಎಂ.ಇಡಿ. ಶೇ. 55 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ಮುಖ್ಯೋಪಾಧ್ಯಾಯರು:
ಎಂ.ಎ / ಎಂ.ಎಸ್ಸಿ, ಬಿ.ಇಡಿ / ಬಿ.ಎ / ಬಿ.ಎಸ್ಸಿ ಬಿ.ಇಡಿ ಶೇ. 55 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಜೊತೆಗೆ 5 ವರ್ಷಗಳ ಅನುಭವ ಹೊಂದಿರಬೇಕು.  
ಉಪನ್ಯಾಸಕರು: ಎಂ.ಎ / ಎಂ.ಕಾಂ, ಎಂ.ಇಡಿ.
ಸಹ ಶಿಕ್ಷಕರು: ಎಂಎ / ಎಂ.ಎಸ್ಸಿ, ಬಿ.ಎ / ಬಿ.ಎಸ್ಸಿ, ಬಿ.ಇಡಿ, ಡಿ.ಇಡಿ,
ಪ್ರಥಮ ದರ್ಜೆ ಸಹಾಯಕರು,ಕಂಪ್ಯೂಟರ್ ಆಪರೇಟರ್: ಬಿ.ಕಾಂ / ಬಿ.ಎಸ್ಸಿ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
ಸೆಕ್ಯೂರಿಟಿ: ಎಸ್.ಎಸ್.ಎಲ್.ಸಿ + ಅನುಭವ ಹೊಂದಿದವರಿಗೆ ಮೊದಲ ಆದ್ಯತೆ.
To Download the News Paper Notification

Comments