➤ ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ (DK Shivakumar) ನೇತೃತ್ವದ ಸರಕಾರವು ಅಧಿಕಾರ ವಹಿಸಿಕೊಂಡು 100 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಸರಕಾರವು 'ದೃಢ ಕರ್ನಾಟಕ ಸಂಕಲ್ಪ' (Drudha Karnataka Sankalpa) ಎಂಬ ಘೋಷವಾಕ್ಯದಡಿ ರಾಜ್ಯದ ಸಮಗ್ರ ಅಭಿವೃದ್ಧಿ, ಡಿಜಿಟಲ್ ಆಡಳಿತ ಮತ್ತು ಗ್ರಾಮೀಣ ಜನತೆಯ ಕಲ್ಯಾಣಕ್ಕಾಗಿ ಹಲವಾರು ಹೊಸ ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದೆ.➤ ಪ್ರಮುಖ ಯೋಜನೆಗಳು ಮತ್ತು ಮುಖ್ಯಾಂಶಗಳು:1. ‘ಸೇವಾ ಒನ್’ (Seva One) - ಡಿಜಿಟಲ್ ವೇದಿಕೆ - ಒನ್ ಗವರ್ನಮೆಂಟ್, ಒನ್ ಡಿಜಿಟಲ್: ನಾಗರಿಕರಿಗೆ ಸರಕಾರದ ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿ ತಲುಪಿಸುವ 'ಸೇವಾ ಒನ್' ಆ್ಯಪ್ ಹಾಗೂ ಪೋರ್ಟಲ್ ಅನ್ನು ಬಿಡುಗಡೆ ಮಾಡಲಾಗಿದೆ. - ನಾಗರಿಕರು ನೇರವಾಗಿ ತಮ್ಮ ದೂರುಗಳು, ಕುಂದುಕೊರತೆಗಳು ಹಾಗೂ ಅಗತ್ಯ ಸೇವೆಗಳಿಗೆ ಅರ್ಜಿ ಸಲ್ಲಿಸಲು ಇದು ಸಹಕಾರಿಯಾಗಿದೆ.2. 'ಮುಖ್ಯಮಂತ್ರಿ ರೈತ ಚೈತನ್ಯ' ಯೋಜನೆ - ಕೃಷಿ ಉತ್ತೇಜನ: ರೈತರ ಆದಾಯವನ್ನು ಹೆಚ್ಚಿಸುವ ಹಾಗೂ ಕಾಲೋಚಿತ ಮತ್ತು ಅಗತ್ಯ ಆಧಾರಿತ ಕೃಷಿ ಸಲಹೆಗಳನ್ನು ಒದಗಿಸುವ ಉದ್ದೇಶ. - ಪ್ರಾರಂಭಿಕ ಜಿಲ್ಲೆಗಳು: ಮೊದಲ ಹಂತದಲ್ಲಿ ಮಂಡ್ಯ, ಬೆಳಗಾವಿ, ವಿಜಯಪುರ, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅನುಷ್ಠಾನ. - ಮುಂದಿನ ದಿನಗಳಲ್ಲಿ ಇದನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. 3. ಮನೆ/ನಿವೇಶನ ಇಲ್ಲದವರಿಗೆ ೫ ಲಕ್ಷ ನಿವೇಶನ ವಿತರಣೆ:- ಬಡವರು ಹಾಗೂ ನಿವೇಶನ ರಹಿತರಿಗೆ (ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ) ಉಚಿತ ನಿವೇಶನ ಒದಗಿಸುವ ಬೃಹತ್ ಯೋಜನೆಯ ಕಡತಕ್ಕೆ ಮುಖ್ಯಮಂತ್ರಿಗಳು ಸಹಿ ಹಾಕಿದ್ದಾರೆ.- ಹಂತ-ಹಂತವಾಗಿ 5 ಲಕ್ಷ ನಿವೇಶನಗಳನ್ನು ವಿತರಿಸಲು ಸರಕಾರ ಗುರಿ ಹೊಂದಿದೆ. 4. ಸಾರಿಗೆ ರಂಗದಲ್ಲಿ ಡಿಜಿಟಲ್ ಕ್ರಾಂತಿ - BMTC 2.0 ಆ್ಯಪ್: ಬೆಂಗಳೂರು ನಗರ ಪ್ರಯಾಣಿಕರಿಗೆ ಬಸ್‌ಗಳ ರಿಯಲ್-ಟೈಮ್ ಟ್ರ್ಯಾಕಿಂಗ್ (Live Tracking), ಡಿಜಿಟಲ್ ಟಿಕೆಟಿಂಗ್, ಹಾಗೂ ಮೆಟ್ರೋ ಮತ್ತು ಬಿಎಂಟಿಸಿ ಸಂಯೋಜಿತ ಪಾಸ್ ಸೌಲಭ್ಯ. - KSRTC ಅವತಾರ 2.0 (One Karnataka Mobility App): ಕೆಎಸ್‌ಆರ್‌ಟಿಸಿ ಮತ್ತು ಎಲ್ಲಾ ಸಾರಿಗೆ ಸಂಸ್ಥೆಗಳ ಬಸ್ ಟಿಕೆಟ್ ಹಾಗೂ ಪ್ರವಾಸೋದ್ಯಮ ಪ್ಯಾಕೇಜ್‌ಗಳನ್ನು ವಾಟ್ಸಾಪ್ ಅಥವಾ ಒಂದೇ ಆ್ಯಪ್ ಮೂಲಕ ಕಾಯ್ದಿರಿಸುವ ವ್ಯವಸ್ಥೆ. 5. ಉದ್ಯೋಗ ನಿಧಿ & 'ಬಿಯಾಂಡ್ ಬೆಂಗಳೂರು' (Beyond Bengaluru)- ಉದ್ಯೋಗ ನಿಧಿ ಯೋಜನೆ: ಪ್ರಾದೇಶಿಕ ಸಮತೋಲನ ಸಾಧಿಸಲು ಹಿಂದುಳಿದ 10 ಜಿಲ್ಲೆಗಳಲ್ಲಿ (ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಬೀದರ್, ಕಲ್ಬುರ್ಗಿ, ಬೆಳಗಾವಿ, ವಿಜಯನಗರ, ಗದಗ, ವಿಜಯಪುರ) ಹೊಸ ಉದ್ಯೋಗ ಸೃಷ್ಟಿಗೆ ಕಂಪನಿಗಳಿಗೆ ಪ್ರತಿ ಉದ್ಯೋಗಿಗೆ ₹2,500 ಪ್ರೋತ್ಸಾಹಧನ.- ಬಿಯಾಂಡ್ ಬೆಂಗಳೂರು: ರಾಜ್ಯದ 5 ಪ್ರಮುಖ ನಗರಗಳನ್ನು ಹೊಸ ಬೆಳವಣಿಗೆ ಕೇಂದ್ರಗಳಾಗಿ (Growth Centres) ಅಭಿವೃದ್ಧಿಪಡಿಸುವುದು. - ಸರಕಾರಿ ನೌಕರರಿಗೆ 10,000 ಮನೆ ನಿರ್ಮಾಣಕ್ಕೂ ಯೋಜನೆ ತರಲಾಗಿದೆ. 6. ಇತರೆ ಪ್ರಮುಖ ಘೋಷಣೆಗಳು - ಸೈನಿಕ ಸಮ್ಮಾನ್: ದೇಶ ಕಾಯುವ ಯೋಧರ ಗೌರವಾರ್ಥ ‘ಸೈನಿಕ ಸಮ್ಮಾನ್’ ಯೋಜನೆ ಜಾರಿ. - ಪರಿಸರ ಸ್ನೇಹಿ ಕ್ರಮ: ಡೀಸೆಲ್ ವಾಹನಗಳಲ್ಲಿ ವಾಯುಮಾಲಿನ್ಯ ತಗ್ಗಿಸಲು ‘ರಿಟ್ರೋಫಿಟ್ ಎಮಿಷನ್ ಕಂಟ್ರೋಲ್ ಡಿವೈಸ್’ (RECD) ಯೋಜನೆ ಪ್ರಾರಂಭ. - ಸರಕಾರಿ ಶಾಲೆಗಳ ಅಭಿವೃದ್ಧಿ: ಸಿಎಸ್‌ಆರ್ (CSR) ಪೋರ್ಟಲ್ ಮೂಲಕ 1,000 ಸರಕಾರಿ ಶಾಲೆಗಳ ಮೂಲಸೌಕರ್ಯ ಮೇಲ್ದರ್ಜೆಗೆ ಏರಿಸುವುದು. - ಉನ್ನತ ಶಿಕ್ಷಣದಲ್ಲಿ ಸೀಟು ಮೀಸಲಾತಿ: ಗ್ರಾಮೀಣ ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ಗಳಲ್ಲಿ %7.5 ಮೀಸಲಾತಿ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಮರುಆರಂಭ.