Loading..!

ಬಾಗಲಕೋಟೆ ಜಿಲ್ಲೆಯ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ CEO ಹುದ್ದೆಗಳ ನೇಮಕ

Tags: Degree
Published by: Yallamma G
|
ಬಾಗಲಕೋಟೆ ಜಿಲ್ಲೆಯ ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ CEO ಹುದ್ದೆಗಳ ನೇಮಕ
ರಡ್ಡೇರ ತಿಮ್ಮಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ CEO ಹುದ್ದೆಗಳ ನೇಮಕಾತಿ | ಅರ್ಜಿ ಪ್ರಕ್ರಿಯೆ, ವೇತನ, ಅರ್ಹತೆ ಸಂಪೂರ್ಣ ಮಾಹಿತಿ ಇಲ್ಲಿದೆ.... 

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ರಡ್ಡೇರ ತಿಮ್ಮಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತದಲ್ಲಿ (PACS) ಖಾಲಿ ಇರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಹುದ್ದೆಯ ನೇಮಕಾತಿ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಗಮನಿಸಿ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಬಹುದು. ಬಾಗಲಕೋಟೆ ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವ ಯುವಕರಿಗೆ ಇದು ಉತ್ತಮ ಅವಕಾಶ. ಈ CEO ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ವೇತನದ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಅರ್ಜಿ ಸಲ್ಲಿಸುಲು ಕೊನೆಯ ದಿನಾಂಕ 27/01/2026.

ಈ ಲೇಖನದಲ್ಲಿ ಅರ್ಜಿ ಪ್ರಕ್ರಿಯೆಯ ಸಂಪೂರ್ಣ ವಿವರಗಳು, ಅಗತ್ಯ ಅರ್ಹತೆಗಳು ಮತ್ತು ವೇತನ ಸೌಲಭ್ಯಗಳ ಬಗ್ಗೆ ಸ್ಪಷ್ಟ ಮಾಹಿತಿ ಕೊಡಲಾಗಿದೆ. ಇದಲ್ಲದೆ ಆಯ್ಕೆ ಪ್ರಕ್ರಿಯೆ ಮತ್ತು ಮುಖ್ಯ ದಿನಾಂಕಗಳ ಬಗ್ಗೆ ಕೂಡ ತಿಳಿಸಲಾಗಿದೆ.

📌 ಹುದ್ದೆಯ ಅಧಿಸೂಚನೆ

🏛️ಸಂಸ್ಥೆ ಹೆಸರು :ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ,ರಡ್ಡೇರ ತಿಮ್ಮಾಪುರ
🧾ಒಟ್ಟು ಹುದ್ದೆಗಳ ಸಂಖ್ಯೆ : 1
👨‍💼ಹುದ್ದೆಯ ಹೆಸರು : ಮುಖ್ಯ ಕಾರ್ಯನಿರ್ವಹಕ 
📍 ಉದ್ಯೋಗ ಸ್ಥಳ : ಕರ್ನಾಟಕ 
💰 ವೇತನ ಶ್ರೇಣಿ: ರೂ. 35,500 - 45,000/-

🎓ಅರ್ಹತಾ ಮಾನದಂಡ : ವಿದ್ಯಾಭ್ಯಾಸ: ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Degree) ಹೊಂದಿರಬೇಕು ಮತ್ತು ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಪ್ರಚಲಿತ ಘಟನೆಗಳ ಆಧಾರಿತ ಪ್ರತಿದಿನದ ಹಾಗೂ ವಾರಾಂತ್ಯದ ಕ್ವಿಜ್ ನಲ್ಲಿ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ

⏳ ವಯಸ್ಸಿನ ಮಿತಿ:  27-01-2026 ಕ್ಕೆ ಅನ್ವಯಿಸುವಂತೆ ಕನಿಷ್ಠ 18 ವರ್ಷದವನಾಗಿರಬೇಕು. ಕರ್ನಾಟಕ ರಾಜ್ಯ ಸರಕಾರ ರೀತ್ಯಾ ಈ ಕೆಳಕಂಡ ಗರಿಷ್ಟ ವಯೋಮಿತಿಗೆ ಒಳಪಟ್ಟಿರಬೇಕು. 
ಸಾಮಾನ್ಯ ವರ್ಗ: ಗರಿಷ್ಠ 35 ವರ್ಷ.
ಹಿಂದುಳಿದ ವರ್ಗಗಳು (2A, 2B, 3A, 3B): ಗರಿಷ್ಠ 38 ವರ್ಷ.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ: ಗರಿಷ್ಠ 40 ವರ್ಷ.
=> ಸರ್ಕಾರದ ಆದೇಶ ಸಂಖ್ಯೆ ಸಿಆಸುಇ262ಸೇನೆ 2025 ಬೆಂಗಳೂರು, ದಿನಾಂಕ: 29-09-2025 ರನ್ವಯ ಹೆಚ್ಚುವರಿ ಸಡಿಲಿಕೆ ಇರುತ್ತದೆ.

💸ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ ₹1000/-, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ₹500/- ಆಯೇಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. 
ಪಾವತಿ ವಿಧಾನ: 'ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ರಡ್ಡೇರ ತಿಮ್ಮಾಪುರ' ಇವರ ಹೆಸರಿನಲ್ಲಿ ಡಿ.ಡಿ (DD) ಪಡೆಯಬೇಕು.

🏛️ ಸಂಸ್ಥೆ ವಿವರ
ಸಂಸ್ಥೆಯ ಹೆಸರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ
ಸ್ಥಳ: ರಡ್ಡೇರ ತಿಮ್ಮಾಪುರ, ಕರ್ನಾಟಕ
ಸ್ಥಾಪನೆ: 15-07-1965
ನೋಂದಣಿ ಸಂಖ್ಯೆ: 22765
ಅಧಿಕೃತ ಅಧಿಸೂಚನೆ ದಿನಾಂಕ: 07-01-2026

💰 ಮಾಸಿಕ ವೇತನ : ವೇತನ ₹35,500 ರಿಂದ ₹45,000 ತನಕ ಇರಲಿದೆ.

💼 ಆಯ್ಕೆ ಪ್ರಕ್ರಿಯೆ : 
ಅಭ್ಯರ್ಥಿಗಳನ್ನು ಅವರು ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಕನ್ನಡ ಓದಲು ಮತ್ತು ಬರೆಯಲು ಕಡ್ಡಾಯವಾಗಿ ಬರಬೇಕು. 

💻 ಅರ್ಜಿ ಸಲ್ಲಿಸುವ ವಿಧಾನ : 
1) ಅರ್ಜಿಯನ್ನು ಸಂಚಾಲಕರು, ಸಿಬ್ಬಂದಿ ನೇಮಕಾತಿ ಸಮಿತಿ ಹಾಗೂ ಮುಖ್ಯ ಕಾರ್ಯನಿರ್ವಾಕರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ರಡ್ಡರ ತಿಮ್ಮಾಪೂರ ಇವರ ಹೆಸರಿಗೆ ಸಲ್ಲಿಸಬೇಕು.
2) ಹುದ್ದೆಯನ್ನು ಕನಿಷ್ಟ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
3) ಅರ್ಜಿಯಲ್ಲಿನ ಎಲ್ಲಾ ಅಂಕಣಗಳನ್ನು ಪೂರ್ತಿ ಭರ್ತಿ ಮಾಡಬೇಕು.
4) ಅಭ್ಯರ್ಥಿಗೆ ಕನ್ನಡ ಭಾಷೆ ಓದಲು ಹಾಗೂ ಬರೆಯುವ ಜ್ಞಾನ ಅವಶ್ಯವಿರುತ್ತದೆ.
5 ) ಅಭ್ಯರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗತಕ್ಕದ್ದು. ಸಂದರ್ಶನದ ದಿನಾಂಕ ಮತ್ತು ವಿವರಗಳನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು.
6) ನಿಗದಿತ ಅರ್ಜಿ ನಮೂನೆಯನ್ನು ಸಂಘದ ಕಚೇರಿಯಲ್ಲಿ ಕೆಲಸದ ದಿವಸಗಳಲ್ಲಿ ಬೆಳಿಗ್ಗೆ 10.30 ರಿಂದ ಸಾಯಂಕಾಲ 4.30 ಘಂಟೆಯ ಅವಧಿಯಲ್ಲಿ ಅರ್ಜಿ ಶುಲ್ಕ ರೂ. 500/- ತುಂಬಿ ಪಡೆಯಬಹುದು.
7) ಅಭ್ಯರ್ಥಿಗಳು ಸ್ವ ವಿಳಾಸ, ಮೊಬೈಲ್ ಸಂಖ್ಯೆ ಒದಗಿಸಬೇಕು.

📝 ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು : ಅರ್ಜಿಯೊಂದಿಗೆ ಈ ಕೆಳಗಿನ ದಾಖಲೆಗಳನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿದ ಪ್ರತಿಗಳನ್ನು ಲಗತ್ತಿಸಬೇಕು.
ಎಸ್‌ಎಸ್‌ಎಲ್‌ಸಿ (SSLC) ಅಂಕಪಟ್ಟಿ.
ಪಿಯುಸಿ (PUC) ಅಂಕಪಟ್ಟಿ.
ಪದವಿ ಅಂಕಪಟ್ಟಿಗಳು.
ಕಂಪ್ಯೂಟರ್ ಪ್ರಮಾಣಪತ್ರ.
ಜಾತಿ ಮತ್ತು ಆದಾಯ ಪ್ರಮಾಣಪತ್ರ.
ಆಧಾರ್ ಕಾರ್ಡ್ ಪ್ರತಿ.

📅 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : ಅವಶ್ಯಕ ದಾಖಲಾತಿಗಳೊಂದಿಗೆ ಭರ್ತಿಮಾಡಿದ ಅರ್ಜಿಯನ್ನು ದಿನಾಂಕ: 27-01-2026 ಸಾಯಂಕಾಲ 4.00 ಘಂಟೆಯ ಒಳಗಡೆ ಸಂಘದ ಕಚೇರಿಯಲ್ಲಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲಾ.

📢 ಇತರೆ ಸೂಚನೆಗಳು :
1) ಪೂರ್ಣ ವಿವರ ಹೊಂದಿರದ ಹಾಗೂ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕೃತ ದಾಖಲೆಗಳನ್ನು ಲಗತ್ತಿಸದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲಾ.
2) ಅಭ್ಯರ್ಥಿಗಳ ಆಯ್ಕೆ/ ಅರ್ಜಿ ಸ್ವೀಕರಿಸುವ ಮತ್ತು ನಿರಾಕರಿಸುವ ಹಕ್ಕನ್ನು ನೇಮಕಾತಿ ಸಮಿತಿ ಕಾಯ್ದಿರಿಸಿಕೊಂಡಿದೆ.
3) ನೇಮಕಾತಿ ಪ್ರಕ್ರಿಯೆಯನ್ನು ಯಾವುದೇ ಕಾರಣವನ್ನು ನೀಡದೇ ಮುಂದೂಡುವ, ರದ್ದುಪಡಿಸುವ ಹಾಗೂ ನಿಬಂಧನೆಗಳನ್ನು ಬದಲಾಯಿಸುವ ಸಂಪೂರ್ಣ ಹಕ್ಕನ್ನು ಸಂಘ ಕಾಯ್ದಿರಿಸಿಕೊಂಡಿದೆ.
4) ಯಾವುದೇ ಅಭ್ಯರ್ಥಿಗಳಿಗೆ ಸಂದರ್ಶನ ಕರೆ ಬಂದಿಲ್ಲವಾದರೆ ಸಂದರ್ಶನಕ್ಕೆ ಅರ್ಹತೆ ಬಂದಿಲ್ಲವೆಂದು ತಿಳಿಯಬೇಕು. ಈ ಕುರಿತು ಪತ್ರ ವ್ಯವಹಾರ/ ದೂರವಾಣಿ ಮೂಲಕ /ಇನ್ನಾವುದೇ ರೀತಿಯ ಸಂಪರ್ಕಕ್ಕೆ ಅವಕಾಶ ಇರುವುದಿಲ್ಲ.
5 ) ನಿಗದಿತ ಅವಧಿಯೊಳಗೆ ಅರ್ಜಿಗಳು ತಲುಪದಿದ್ದಲ್ಲಿ ಸಂಘವು ಜವಾಬ್ದಾರಿ ಯಾಗಿರುವುದಿಲ್ಲ.

🎯ಮುಖ್ಯ ಅಂಶಗಳು
• ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ
• ಸ್ಥಿರ ಉದ್ಯೋಗ & ಉತ್ತಮ ವೇತನ
• ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡಲು ಉತ್ತಮ ಅವಕಾಶ
• 1965 ರಿಂದ ಕಾರ್ಯನಿರ್ವಹಿಸುವ ವಿಶ್ವಾಸಾರ್ಹ ಸಂಸ್ಥೆ

📌 ಆಸಕ್ತ ಅಭ್ಯರ್ಥಿಗಳು ಸಮಯ ವ್ಯರ್ಥ ಮಾಡದೆ ಈಗಲೇ ದಾಖಲೆ ಸಿದ್ಧಪಡಿಸಿ ಅರ್ಜಿ ಸಲ್ಲಿಸಿ. ಸಹಕಾರ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಗೋಲ್ಡನ್ ಅವಕಾಶ!
Job Overview
End Date
27 ಜನವರಿ 2026
Employment Type
FULL_TIME
Organization
KPSC Vaani (Website)
Location
KA,
To Download Official Notification
Related Tags: Degree

Comments