ಶಿಕ್ಷಕರಾಗುವ ಕನಸು ನನಸಾಗಿಸಿಕೊಳ್ಳಲು ಇದೇ ಸರಿಯಾದ ಸಮಯ | ಈಗ ಅವಕಾಶ ಮಿಸ್ ಮಾಡ್ಕೊಂಡ್ರೆ ಅಷ್ಟೇ...
ಶಿಕ್ಷಕರಾಗುವ ಕನಸು ನನಸಾಗಿಸಿಕೊಳ್ಳಲು ಇದೇ ಸರಿಯಾದ ಸಮಯ: ಎಲ್ಲಾ ಶಿಕ್ಷಕರ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಿ, ನಿಮ್ಮ ಬದುಕಿನ ದಿಕ್ಕನ್ನೇ ಬದಲಿಸಿಕೊಳ್ಳಿ
ಶಿಕ್ಷಕ ವೃತ್ತಿ ಕೇವಲ ಒಂದು ಉದ್ಯೋಗವಲ್ಲ, ಅದೊಂದು ಜವಾಬ್ದಾರಿ ಮತ್ತು ಪವಿತ್ರ ಸೇವೆ. ಬಿ.ಎಡ್ (B.Ed), ಡಿ.ಎಡ್ (D.Ed) ಮುಗಿಸಿ, ಶಿಕ್ಷಕರಾಗುವ ಕನಸು ಹೊತ್ತು ಕುಳಿತಿರುವ ಅಭ್ಯರ್ಥಿಗಳಿಗೆ ಇದೀಗ ಸುವರ್ಣಾವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ. ಶಿಕ್ಷಕ ಹುದ್ದೆಗೆ ಅರ್ಹತೆ ಇದ್ದು, ಈ ಬಾರಿಯ ನೇಮಕಾತಿ ಅಲೆಗಳಲ್ಲಿ ನೀವು ಸರ್ಕಾರಿ ಹುದ್ದೆ ಗಿಟ್ಟಿಸಿಕೊಳ್ಳಲಿಲ್ಲ ಎಂದರೆ, ಭವಿಷ್ಯದಲ್ಲಿ ಇಂಥದ್ದೊಂದು ಅವಕಾಶ ಮತ್ತೆ ಸಿಗುವುದು ಕಷ್ಟಸಾಧ್ಯ.
ಶಿಕ್ಷಕ ಆಕಾಂಕ್ಷಿಗಳೇ, ನಿಮ್ಮ ಗುರಿ ಸ್ಪಷ್ಟವಾಗಿರಲಿ, ಸಿದ್ಧತೆ ಜೋರಾಗಿರಲಿ. ನಿಮ್ಮ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಆಕಾಂಕ್ಷಿಯೂ ಓದಲೇಬೇಕಾದ ಸ್ಫೂರ್ತಿದಾಯಕ ಬರಹವಿದು.
1. ಸಾಲು ಸಾಲು ನೇಮಕಾತಿಗಳು: ಯಾವುದನ್ನೂ ಕೈಬಿಡದಿರಿ!
ಮುಂದಿನ ದಿನಗಳಲ್ಲಿ ಶಿಕ್ಷಣ ಇಲಾಖೆ ಹಾಗೂ ವಿವಿಧ ಕಲ್ಯಾಣ ಇಲಾಖೆಗಳಿಂದ ಬೃಹತ್ ಮಟ್ಟದ ನೇಮಕಾತಿಗಳು ನಡೆಯಲಿವೆ. ಕೇವಲ ಒಂದೇ ಪರೀಕ್ಷೆಗೆ ಕಾಯದೆ, ಅರ್ಹತೆ ಇರುವ ಪ್ರತಿಯೊಂದು ಹುದ್ದೆಗೂ ಅರ್ಜಿ ಸಲ್ಲಿಸಿ, ಪರೀಕ್ಷೆ ಎದುರಿಸಿ:
PSTR, GPSTR ಹಾಗೂ HSTR: ಪ್ರಾಥಮಿಕ, ಪದವೀಧರ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗಳಿಗೆ ಮೊದಲ ಆದ್ಯತೆ ನೀಡಿ ಸಿದ್ಧರಾಗಿ.
KRIES (ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ): ವಸತಿ ಶಾಲೆಗಳ ಶಿಕ್ಷಕ ಹುದ್ದೆಗಳಿಗೆ ಅತ್ಯುತ್ತಮ ವೇತನ ಹಾಗೂ ಸೌಲಭ್ಯಗಳಿರುತ್ತವೆ.
ಸಮಾಜ ಕಲ್ಯಾಣ ಇಲಾಖೆ (Social Welfare): ಇಲ್ಲಿಯೂ ಶಿಕ್ಷಕ ಮತ್ತು ಬೋಧಕೇತರ ಹುದ್ದೆಗಳ ಅವಕಾಶಗಳಿವೆ.
ಹಾಸ್ಟೆಲ್ ವಾರ್ಡನ್ (Hostel Warden): ಶಿಕ್ಷಕ ವೃತ್ತಿಯ ಜೊತೆಗೆ ವಾರ್ಡನ್ ಹುದ್ದೆಗಳಿಗೂ ನಿಮ್ಮ ತಯಾರಿ ಉಪಯುಕ್ತವಾಗುತ್ತದೆ.
ಒಂದು ಕಿವಿಮಾತು: ಸಾಧ್ಯವಾದಷ್ಟು ಪ್ರೌಢಶಾಲೆ ಅಥವಾ ಮೇಲಿನ ಹಂತದ ಹುದ್ದೆಗಳಿಗೆ (ದೊಡ್ಡ ಸಾಲಿ ಮಾಸ್ತರ್) ಗುರಿ ಇಡಿ. ಅಲ್ಲಿ ಉತ್ತಮ ವೇತನ ಶ್ರೇಣಿಯಿರುತ್ತದೆ, ಜೊತೆಗೆ ಬಿಸಿಯೂಟ, ಹಾಲು, ಬಾಳೆಹಣ್ಣು ವಿತರಣೆಯಂತಹ ಬೋಧಕೇತರ ಕೆಲಸಗಳ ಒತ್ತಡ ತುಲನಾತ್ಮಕವಾಗಿ ಕಡಿಮೆ ಇರುತ್ತದೆ.
2. ಅತಿಥಿ ಶಿಕ್ಷಕ ವೃತ್ತಿ: ಅನುಭವಕ್ಕೆ ಸೀಮಿತವಾಗಿರಲಿ, ಬದುಕಿಗಲ್ಲ
"ನೆಂಟರು ಮನೆಗೆ ಮೂರು ದಿನ ಬಂದರೆ ಮಾತ್ರ ಮರ್ಯಾದೆ, ಅಲ್ಲೇ ಟಿಕಾಣಿ ಹೂಡಿದರೆ ಗೌರವ ಇರಲ್ಲ" ಎಂಬ ಮಾತಿದೆ. ಇದು ಅತಿಥಿ ಶಿಕ್ಷಕ (Guest Teacher) ವೃತ್ತಿಗೂ ಅನ್ವಯಿಸುತ್ತದೆ.
ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸುವುದು ನಿಮ್ಮ ಬೋಧನಾ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಉತ್ತಮ ವೇದಿಕೆ ಹೌದು. ಆದರೆ, ವರ್ಷಾನುಗಟ್ಟಲೆ ಅದೇ ಹುದ್ದೆಯಲ್ಲಿ ಮುಂದುವರಿದರೆ ಶಾಲೆಯಲ್ಲೂ, ಸಮಾಜದಲ್ಲೂ ಮತ್ತು ಸ್ವತಃ ಮನೆಯಲ್ಲೂ ನಿಮ್ಮ ಬಗ್ಗೆ ಇರುವ ಗೌರವ ಕಡಿಮೆಯಾಗುವ ಅಪಾಯವಿರುತ್ತದೆ. ಬದುಕು ರೂಪಿಸುವ ಶಿಕ್ಷಕನ ಬದುಕು ಎಂದಿಗೂ ಅತಂತ್ರವಾಗಬಾರದು. ಆದ್ದರಿಂದ, ಅತಿಥಿ ಹುದ್ದೆಯನ್ನು ಕೇವಲ ತಾತ್ಕಾಲಿಕ ಅನುಭವವನ್ನಾಗಿ ಪರಿಗಣಿಸಿ, ಕಾಯಂ ಸರ್ಕಾರಿ ಹುದ್ದೆ ಪಡೆಯಲು ಹಗಲಿರುಳು ಶ್ರಮಿಸಿ.
3. ಮಕ್ಕಳ ಪಾಲಿನ 'ನಿಜವಾದ ಹೀರೋ' ನೀವೇ ಆಗಿ!
ತರಗತಿಯಲ್ಲಿ ಪಾಠ ಮಾಡುವಾಗ ಮಕ್ಕಳ ಮುಂದೆ ಕೇವಲ ಐಎಎಸ್ (IAS), ಕೆಎಎಸ್ (KAS) ಅಥವಾ ಪೊಲೀಸ್ ಅಧಿಕಾರಿಗಳ ಉದಾಹರಣೆ ನೀಡಿ ಅವರನ್ನೇ ಸ್ಫೂರ್ತಿಯಾಗಿಸಿಕೊಳ್ಳಿ ಎಂದು ಹೇಳುವುದನ್ನು ಬಿಡಿ. ಬದಲಾಗಿ, ನಿಮ್ಮ ಸಾಧನೆ, ನಿಮ್ಮ ಜ್ಞಾನ ಮತ್ತು ನಿಮ್ಮ ವ್ಯಕ್ತಿತ್ವವೇ ಆ ಮಕ್ಕಳಿಗೆ ಅತಿದೊಡ್ಡ ಸ್ಫೂರ್ತಿಯಾಗಬೇಕು. ನಿಮ್ಮನ್ನು ನೀವು ಎಂದಿಗೂ ಸಣ್ಣವರಾಗಿ ಬಿಂಬಿಸಿಕೊಳ್ಳಬೇಡಿ. ಒಬ್ಬ ಯಶಸ್ವಿ ಶಿಕ್ಷಕನೇ ನೂರಾರು ಅಧಿಕಾರಿಗಳನ್ನು ಸೃಷ್ಟಿಸಬಲ್ಲ ಮಾರ್ಗದರ್ಶಕ.
4. 1 ರಿಂದ 10ನೇ ತರಗತಿ: ಭಾವನಾತ್ಮಕ ಸಂಬಂಧದ ಸುವರ್ಣ ಘಟ್ಟ
ಶಿಕ್ಷಕ ವೃತ್ತಿಯಲ್ಲಿ ಅತ್ಯಂತ ಭಾವನಾತ್ಮಕ ಹಾಗೂ ನಿಷ್ಕಲ್ಮಶ ಪ್ರೀತಿ ಸಿಗುವುದು 1 ರಿಂದ 10ನೇ ತರಗತಿಯ ಮಕ್ಕಳಿಂದ ಮಾತ್ರ. ಆ ವಯಸ್ಸಿನ ಮಕ್ಕಳು ಕಲ್ಮಶವಿಲ್ಲದ ಮನಸ್ಸಿನವರು. ಬಿ.ಎಡ್ ನಲ್ಲಿ ನೀವು ಓದಿದ ಶೈಕ್ಷಣಿಕ ಮನೋವಿಜ್ಞಾನ, ಮೌಲ್ಯ ಶಿಕ್ಷಣ, ಮಕ್ಕಳ ಕಲಿಕಾ ಸಾಮರ್ಥ್ಯದ ಸಿದ್ಧಾಂತಗಳನ್ನು ನಿಜವಾದ ಅರ್ಥದಲ್ಲಿ ಅಳವಡಿಸಲು ಇದುವೇ ಸೂಕ್ತ ಹಂತ. ಮಕ್ಕಳಿಗಾಗಿ ಮಿಡಿಯುವ ಹೃದಯವಿದ್ದಾಗ ಮಾತ್ರ ವೃತ್ತಿಜೀವನ ಸಾರ್ಥಕವಾಗುತ್ತದೆ.
ಆಕಾಂಕ್ಷಿಗಳಿಗೆ ಅಂತಿಮ ಸಂದೇಶ: ಸಮಯ ವ್ಯರ್ಥ ಮಾಡಬೇಡಿ. ಇಂದು ನೀವು ಮಾಡುವ ತ್ಯಾಗ ಮತ್ತು ಕಠಿಣ ಪರಿಶ್ರಮ, ನಾಳೆ ನಿಮಗೆ ಸಮಾಜದಲ್ಲಿ ಉನ್ನತ ಸ್ಥಾನ ಮತ್ತು ಆರ್ಥಿಕ ಭದ್ರತೆಯನ್ನು ತಂದುಕೊಡುತ್ತದೆ. ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವತ್ತ ಇಂದೇ ಹೆಜ್ಜೆ ಇಡಿ. ಅಧ್ಯಯನ ಸಾಮಗ್ರಿಗಳು, ನೇಮಕಾತಿ ಅಧಿಸೂಚನೆಗಳು ಮತ್ತು ಪರೀಕ್ಷಾ ಮಾರ್ಗದರ್ಶನಕ್ಕಾಗಿ KPSCVaani ನಿಮ್ಮ ಜೊತೆಗಿದೆ.
"ನನಗೆ ಆಗುತ್ತದೆಯೇ?" ಎಂದು ಯೋಚಿಸುವುದನ್ನು ನಿಲ್ಲಿಸಿ
ಶಿಕ್ಷಕ ಹುದ್ದೆಗೆ ತಯಾರಿ ನಡೆಸುವಾಗ ಹಲವಾರು ಪ್ರಶ್ನೆಗಳು ಮನಸ್ಸಿಗೆ ಬರುತ್ತವೆ.
"ನನಗೆ ಸರ್ಕಾರಿ ಶಿಕ್ಷಕ ಹುದ್ದೆ ಸಿಗುತ್ತದೆಯೇ?"
"ನಾನು ಪರೀಕ್ಷೆಯಲ್ಲಿ ಪಾಸ್ ಆಗುತ್ತೇನೆಯೇ?"
"ಇಷ್ಟೊಂದು ಜನರ ನಡುವೆ ನನಗೆ ಅವಕಾಶ ಸಿಗುತ್ತದೆಯೇ?"
ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸಮಯ ಕಳೆಯಬೇಡಿ.
ಅದರ ಬದಲು ನಿಮ್ಮನ್ನು ನೀವು ಕೇಳಿಕೊಳ್ಳಿ:
"ನನಗೆ ಅರ್ಹತೆ ಇದೆ. ನಾನು ಪ್ರಾಮಾಣಿಕವಾಗಿ ತಯಾರಿ ನಡೆಸುತ್ತಿದ್ದೇನೆಯೇ?"
ಉತ್ತರ "ಹೌದು" ಎಂದಾದರೆ ಮುಂದುವರಿಯಿರಿ.
ಮೊದಲ ಪ್ರಯತ್ನದಲ್ಲಿ ಯಶಸ್ಸು ಸಿಗದಿದ್ದರೂ ಪರವಾಗಿಲ್ಲ.
ಆದರೆ ಪ್ರಯತ್ನಿಸದೇ ಅವಕಾಶ ಕಳೆದುಕೊಳ್ಳುವುದು ಮಾತ್ರ ನಿಮ್ಮ ಕೈಯಲ್ಲಿರುವ ದೊಡ್ಡ ಸೋಲು.
ಈಗಲೇ ನಿಮ್ಮ ತಯಾರಿಗೆ ಹೊಸ ವೇಗ ನೀಡಿ
ಶಿಕ್ಷಕರ ನೇಮಕಾತಿ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿರುವವರು ಈಗಿನಿಂದಲೇ ನಿಮ್ಮ ಅಧ್ಯಯನಕ್ಕೆ ಒಂದು ಸ್ಪಷ್ಟವಾದ ಯೋಜನೆ ರೂಪಿಸಿಕೊಳ್ಳಿ.
ನಿಮಗೆ ಅರ್ಹತೆ ಇರುವ ಎಲ್ಲಾ ನೇಮಕಾತಿಗಳ ಮಾಹಿತಿಯನ್ನು ಗಮನಿಸಿ.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ತಪ್ಪಿಸಿಕೊಳ್ಳಬೇಡಿ.
ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿ.
ವಿಷಯವಾರು Revision ಮಾಡಿ.
ಪ್ರತಿದಿನ Mock Test ಬರೆಯಿರಿ.
ತಪ್ಪಾದ ಪ್ರಶ್ನೆಗಳನ್ನು ಪ್ರತ್ಯೇಕವಾಗಿ ದಾಖಲಿಸಿಕೊಂಡು ಮತ್ತೆ ಓದಿ.
ಪರೀಕ್ಷೆಯ ದಿನದವರೆಗೆ ನಿರಂತರವಾಗಿ Current Affairs ಮತ್ತು ಸಂಬಂಧಿತ ವಿಷಯಗಳನ್ನು ಪರಿಷ್ಕರಿಸಿ.
ಒಂದು ಪರೀಕ್ಷೆಯ ಫಲಿತಾಂಶದಿಂದ ನಿಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಿಕೊಳ್ಳಬೇಡಿ.
ಅರ್ಜಿ → ತಯಾರಿ → ಪರೀಕ್ಷೆ → ಅನುಭವ → ಮತ್ತಷ್ಟು ತಯಾರಿ → ಯಶಸ್ಸು
ಇದೇ ನಿಮ್ಮ ಪ್ರಯಾಣವಾಗಲಿ.
ನಿಮ್ಮ Dream ಅನ್ನು Reality ಆಗಿ ಪರಿವರ್ತಿಸುವ ಸಮಯ ಇದೇ.
ಇಂದೇ ತಯಾರಿ ಆರಂಭಿಸಿ. ಅವಕಾಶ ಬಂದಾಗ ಅರ್ಜಿ ಸಲ್ಲಿಸಿ. ಪರೀಕ್ಷೆ ಬರೆಯಿರಿ. ನಿಮ್ಮ ಶಿಕ್ಷಕ ವೃತ್ತಿಯ ಕನಸನ್ನು ನನಸಾಗಿಸಿಕೊಳ್ಳಿ.
– KPSCVaani
ಈ ಶಿಕ್ಷಕ ನೇಮಕಾತಿಗಾಗಿ ಉಪಯುಕ್ತ ಅಧ್ಯಯನ ಪುಸ್ತಕಗಳು, ಅಧ್ಯಯನ ಸಾಮಗ್ರಿ, ಹಳೆಯ ಪ್ರಶ್ನೆ ಪತ್ರಿಕೆ ಹಾಗೂ ಹೆಚ್ಚಿನ ಮಾಹಿತಿಗಾಗಿ ನಿತ್ಯ KPSCVaani ಜಾಲತಾಣಕ್ಕೆ ಭೇಟಿ ನೀಡಿರಿ

Comments