Job Description: ➤ ಅಯೋಧ್ಯೆಯ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಆಡಳಿತ ಹಾಗೂ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಭಾರತೀಯ ವಾಯುಪಡೆಯ (IAF) ಮಾಜಿ ಏರ್ ಮಾರ್ಷಲ್ ಮತ್ತು 'ಆಪರೇಷನ್ ಸಿಂದೂರ್' ಕಮಾಂಡರ್ ಆಗಿದ್ದ ಜಿತೇಂದ್ರ ಮಿಶ್ರಾ (ನಿವೃತ್ತ) ಅವರನ್ನು ಟ್ರಸ್ಟ್‌ನ ಮೊದಲ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಆಗಿ ನೇಮಕ ಮಾಡಲಾಗಿದೆ. - ಹುದ್ದೆ: ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮೊದಲ ಸಿಇಒ (CEO). - ಆಯ್ಕೆಯಾದವರು: ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ. - ಸೈನಿಕ ಸಾಧನೆ: 'ಆಪರೇಷನ್ ಸಿಂದೂರ್' ಸಮಯದ ಪಶ್ಚಿಮ ವಾಯು ಕಮಾಂಡ್‌ನ ಕಮಾಂಡರ್ ಇನ್ ಚೀಫ್. - ಗೌರವ/ಪ್ರಶಸ್ತಿ: ಅತ್ಯುನ್ನತ ಮಿಲಿಟರಿ ಗೌರವವಾದ ಸರ್ವೋತ್ತಮ ಯುದ್ಧ ಸೇವಾ ಪದಕ (SYSM).- ಮೂಲ ಸ್ಥಳ: ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ಭೋಪತ್‌ಪುರ. ➤ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಿತು? ಟ್ರಸ್ಟ್ ನಡಾವಳಿಯಲ್ಲಿ ಪಾರದರ್ಶಕತೆ ಮತ್ತು ವೃತ್ತಿಪರ ಆಡಳಿತ ತರಲು ಸಿಇಒ ಹುದ್ದೆಗೆ ಅರ್ಜಿ ಕರೆಯಲಾಗಿತ್ತು. - ಅರ್ಜಿಗಳು: ದೇಶದಾದ್ಯಂತ ಒಟ್ಟು 5,585 ಪ್ರಖ್ಯಾತ ವ್ಯಕ್ತಿಗಳಿಂದ ಅರ್ಜಿಗಳು ಬಂದಿದ್ದವು. - ಆಯ್ಕೆ ಸಮಿತಿ: ನಿವೃತ್ತ ನ್ಯಾಯಮೂರ್ತಿ ಪರ್ಮೊಡ್ ಕೊಹ್ಲಿ, ಲೆಫ್ಟಿನೆಂಟ್ ಜನರಲ್ (ನಿ) ವಿಕ್ರಾಂತ್ ಚತುರ್ವೇದಿ ಮತ್ತು ಪರಮಾಣು ವಿಜ್ಞಾನಿ ಡಾ. ಸುರೇಶ್ ಹವಾರೆ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯು ಅಭ್ಯರ್ಥಿಗಳನ್ನು ಪರಿಶೀಲಿಸಿತು. - ಅಂತಿಮ ಆಯ್ಕೆ: ಆನ್‌ಲೈನ್ ಮತ್ತು ಮುಖಾಮುಖಿ ಸಂದರ್ಶನದ ಬಳಿಕ ಅಂತಿಮ 3 ಹೆಸರುಗಳನ್ನು ಟ್ರಸ್ಟ್‌ಗೆ ಸಲ್ಲಿಸಲಾಯಿತು, ಅದರಲ್ಲಿ ಜಿತೇಂದ್ರ ಮಿಶ್ರಾ ಅವರನ್ನು ಸಿಇಒ ಆಗಿ ಆಯ್ಕೆ ಮಾಡಲಾಯಿತು. ➤ ಜಿತೇಂದ್ರ ಮಿಶ್ರಾ:- ಮಿಲಿಟರಿ ಸೇವೆ: 1986 ರಲ್ಲಿ ಫೈಟರ್ ಪೈಲಟ್ ಆಗಿ ಸೇವೆಯಾರಂಭಿಸಿ 2026 ರಲ್ಲಿ ನಿವೃತ್ತರಾದರು (39 ವರ್ಷಗಳ ಸೇವೆ).- ಫ್ಲೈಯಿಂಗ್ ಅನುಭವ: 3,000 ಕ್ಕೂ ಹೆಚ್ಚು ಗಂಟೆಗಳ ಹಾರಾಟ ನಡೆಸಿರುವ ಅನುಭವ.- ಬೆಂಗಳೂರು ನಂಟು: ಬೆಂಗಳೂರಿನ ಹೆಚ್.ಎ.ಎಲ್ (HAL) ಮತ್ತು ASTE (ಏರ್‌ಕ್ರಾಫ್ಟ್ ಅಂಡ್ ಸಿಸ್ಟಮ್ಸ್ ಟೆಸ್ಟಿಂಗ್ ಎಸ್ಟಾಬ್ಲಿಷ್‌ಮೆಂಟ್) ಕಮಾಂಡೆಂಟ್ ಆಗಿ ಕಾರ್ಯನಿರ್ವಹಣೆ.- ಕಾರ್ಗಿಲ್ ಯುದ್ಧ ಕೊಡುಗೆ: 'ಮಿರಾಜ್ 2000' ವಿಮಾನದಲ್ಲಿ ಲೇಸರ್ ಗೈಡೆಡ್ ಬಾಂಬ್‌ಗಳನ್ನು ಅಳವಡಿಸುವ ಯೋಜನೆಯ ಪ್ರಮುಖ ಭಾಗವಾಗಿದ್ದರು.- ಆಪರೇಷನ್ ಸಿಂದೂರ : ಪಶ್ಚಿಮ ವಾಯು ಕಮಾಂಡರ್ ಆಗಿ ಸೇನಾ ಕಾರ್ಯಾಚರಣೆಗಳ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದರು.