* ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 21ನೇ ಕಂತಿನ ಹಣಕಾಸು ನೆರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮಿಳುನಾಡಿನ ಕೋಯಮತ್ತೂರಿನಲ್ಲಿ ನಡೆದ ದಕ್ಷಿಣ ಭಾರತ ನೈಸರ್ಗಿಕ ಕೃಷಿ ಶೃಂಗಸಭೆಯ ಸಂದರ್ಭದಲ್ಲಿ ಬಿಡುಗಡೆ ಮಾಡಿದರು. ಈ ಕಂತಿನಡಿ ದೇಶದ 9 ಕೋಟಿ ಗಿಂತ ಹೆಚ್ಚು ರೈತರಿಗೆ ₹18,000 ಕೋಟಿಗೂ ಹೆಚ್ಚು ನೇರ ನೆರವು DBT ಮೂಲಕ ಜಮಾ ಮಾಡಲಾಗಿದೆ. ಪ್ರತಿಯೊಂದು ಅರ್ಹ ರೈತರ ಬ್ಯಾಂಕ್ ಖಾತೆಗೆ ₹2,000 ಆಗಿ ಹಣ ಜಮೆಯಾಗಿದ್ದು, ಇದು ಸಣ್ಣ ಮತ್ತು ಅಲ್ಪಭೂಧಾರಕ ರೈತರಿಗೆ ದೊಡ್ಡ ಮಟ್ಟದ ಬೆಂಬಲವಾಗಿ ಪರಿಣಮಿಸಿದೆ.
* 2019ರಲ್ಲಿ ಆರಂಭವಾದ ಪಿಎಂ–ಕಿಸಾನ್ ಯೋಜನೆ ಭಾರತದ ಅತ್ಯಂತ ದೊಡ್ಡ ರೈತ-ಕೇಂದ್ರೀಕೃತ DBT ಕಾರ್ಯಕ್ರಮವಾಗಿದ್ದು, ವರ್ಷಕ್ಕೆ ₹6,000 ನೇರ ನೆರವು ಒದಗಿಸುವ ಮೂಲಕ ರೈತರ ಮೂಲ ಕೃಷಿ ಖರ್ಚುಗಳನ್ನು ತಗ್ಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಬಿತ್ತನೆ, ರಸಗೊಬ್ಬರ, ಕೀಟನಾಶಕ ಮತ್ತು ಇತರೆ ಕೃಷಿ ವೆಚ್ಚಗಳನ್ನು ನಿಭಾಯಿಸಲು ಈ ನೆರವು ನೆರವಾಗುತ್ತದೆ. ಇದರಿಂದ ಖಾಸಗಿ ಸಾಲದ ಅವಲಂಬನೆ ಕಡಿಮೆಯಾಗುತ್ತಿದ್ದು, ರೈತರ ಆರ್ಥಿಕ ಸಬಲಿಕರಣಕ್ಕೆ ದಾರಿಯಾಗಿದೆ.
* ಯೋಜನೆಯಡಿ ಭೂಸ್ವಾಮ್ಯ ಹೊಂದಿರುವ ಎಲ್ಲ ರೈತ ಕುಟುಂಬಗಳು ಅರ್ಹರಾಗಿದ್ದರೂ, ಆದಾಯ ತೆರಿಗೆ ಪಾವತಿಸುವವರು, ಸರ್ಕಾರಿ ನೌಕರರು ಹಾಗೂ ಕೆಲವು ವರ್ಗದ ಜನರಿಗೆ ಅರ್ಹತೆ ಇಲ್ಲ. DBT ವ್ಯವಸ್ಥೆಯಿಂದ ಹಣಕಾಸು ಹಂಚಿಕೆಯಲ್ಲಿ ಪಾರದರ್ಶಕತೆ ಮತ್ತು ವೇಗ ಹೆಚ್ಚುವಿಕೆಯಾಗಿದೆ.
* ಪಿಎಂ–ಕಿಸಾನ್ ಯೋಜನೆ ಗ್ರಾಮೀಣ ಆರ್ಥಿಕತೆಯನ್ನು ಚೈತನ್ಯಗೊಳಿಸುವಲ್ಲಿ, ಕೃಷಿ ಉತ್ಪಾದಕತೆ ಮತ್ತು ರೈತರ ಆದಾಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ. ರೈತ ಕುಟುಂಬಗಳಿಗೆ ಇದು ಆರ್ಥಿಕ ಭದ್ರತೆಯ ಸುರಕ್ಷಾ ಕವಚವಾಗಿ ಪರಿಣಮಿಸಿದ್ದು, ಭಾರತದ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.
ಗುರುವಾರ, 20 ನವೆಂಬರ್ 2025
12:09 ಅಪರಾಹ್ನ
Daily PDF
ಪಿಎಂ–ಕಿಸಾನ್ 21ನೇ ಕಂತು ಬಿಡುಗಡೆ: ರೈತರ ಆರ್ಥಿಕ ಭದ್ರತೆಗೆ ಮತ್ತೊಂದು ಬಲ
Authored by:
Akshata Halli