ಬೆಂಗಳೂರು: ರಣಜಿ ಟ್ರೋಫಿಯ ಮುಂಬೈ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಆಲ್ರೌಂಡರ್ ಪ್ರದರ್ಶನ ನೀಡಿ 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಪ್ರಸಕ್ತ ಸಾಲಿನ ರಣಜಿ ಟ್ರೋಫಿಯ ಬಿ ಗುಂಪಿನಲ್ಲಿ ಕರುಣ್ ನಾಯರ್ ಪಡೆ ತನ್ನ ಎರಡನೇ ಗೆಲುವು ದಾಖಲಿಸಿದೆ. ಕರ್ನಾಟಕ ತಂಡ ಅಮೋಘ ವಿಜಯಿಯಾಗುತ್ತಿದ್ದಂತೆ ರಣಜಿ ಕ್ರಿಕೆಟ್​ ಇತಿಹಾಸದಲ್ಲಿ 200ನೇ ಜಯ ಸಾಧಿಸಿ ಹೊಸ ಮೈಲುಗಲ್ಲು ತಲುಪಿದೆ. ಅಷ್ಟೇ ಅಲ್ಲದೆ ರಣಜಿ ಕ್ರಿಕೆಟ್​ ಇತಿಹಾಸದಲ್ಲಿ ಅತೀ ಹೆಚ್ಚು ಜಯ ಸಾಧಿಸಿದ ಎರಡನೇ ತಂಡವಾಗಿ ದಾಖಲೆ ಬರೆದಿದೆ.