Loading..!

ಭಾರತೀಯ ಸೇನೆ ಸೇರುವವರಿಗೆ ಸುವರ್ಣಾವಕಾಶ ಕೊಡಗು ಜಿಲ್ಲೆಯಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯಲಿದ್ದು ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
| Date:12 ಆಗಸ್ಟ್ 2019
not found
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಕನಸು ಹೊಂದಿದ ಕರ್ನಾಟಕದ ಅಭ್ಯರ್ಥಿಗಳಿಗೊಂದು ಸುವರ್ಣಾವಕಾಶ ಒದಗಿ ಬಂದಿದ್ದು, ಕೊಡಗು ಜಿಲ್ಲೆಯಲ್ಲಿ ಭಾರತೀಯ ಸೇನಾ ರ್ಯಾಲಿ ನಡೆಯಲಿದ್ದು, ಈ ಕುರಿತು ಅಧಿಸೂಚನೆ ಪ್ರಕಟವಾಗಿದೆ.
ಈಗಾಗಲೇ ಈ ನೇಮಕಾತಿ ರ್ಯಾಲಿಯಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಈ ನೇಮಕಾತಿ ರ್ಯಾಲಿಯು ಕರ್ನಾಟಕದ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೊಡಗು, ಚಿತ್ರದುರ್ಗ, ಬಳ್ಳಾರಿ ಮತ್ತು ಮಡಿಕೇರಿ ಜಿಲ್ಲೆಗಳ ಅಭ್ಯರ್ಥಿಗಳಿಗೆ ಅನ್ವಯಿಸಲಿದೆ ಹಾಗೂ ಉಳಿದ ಜಿಲ್ಲೆಗಳ ಅಭ್ಯರ್ಥಿಗಳಿಗೆ ಮತ್ತೊಂದು ನೇಮಕಾತಿಯಲ್ಲಿ ಶೀಘ್ರದಲ್ಲೇ ಕೊಪ್ಪಳದಲ್ಲಿ ನಡೆಯುತ್ತದೆ ಹಾಗು ಈ ನೇಮಕಾತಿಯ ಮಾಹಿತಿಯನ್ನು ಶೀಘ್ರದಲ್ಲಿ ಒದಗಿಸಲಾಗುವದು.

ಈ ನೇಮಕಾತಿಯಲ್ಲಿ
* ಸೋಲ್ಜರ್ ಜನರಲ್ ಡ್ಯೂಟಿ,
* ಹವಾಲ್ದಾರ್,
* ಸರ್ವೆ ಅಟೋಮೇಟೆಡ್ ಕೆರಟೋಗ್ರಾಪರ್,
* ಜೂನಿಯರ್ ಕಮಿಷನ್ಡ್ ಆಫೀಸರ್,
* ಜೂನಿಯರ್ ಕಮಿಷನ್ಡ್ ರಿಲೀಜಿಯಸ್ ಟೀಚರ್,
* ಜೂನಿಯರ್ ಕಮಿಷನ್ಡ್ ಆಫೀಸರ್ ಕ್ಯಾಟರಿಂಗ್ ಹುದ್ದೆಗಳಿಗೆ ನೇಮಕ ನಡೆಯಲಿದೆ.

ಪ್ರಮುಖ ದಿನಾಂಕಗಳು :
* ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 09-08-2019 to 22-09-2019
* ಪ್ರವೇಶ ಪತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳುವ ದಿನಾಂಕ : 23-09-2019
* ನೇಮಕಾತಿ ರ್ಯಾಲಿ ನಡೆಯುವ ದಿನಾಂಕ : 29-09-2019 to 04-10-2019

ರ್ಯಾಲಿ ನಡೆಯುವ ಸ್ಥಳ : ಡಿಸ್ಟ್ರಿಕ್ಟ್ ಸ್ಪೋರ್ಟ್ಸ್ ಸ್ಟೇಡಿಯಂ ಮೆನ್ಸ್ ಕಾಂಪೌಂಡ್ ಮಡಿಕೇರಿ

ಈ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಬಹುದು : Bangalore Urban, Bangalore Rural, Tumkur, Mandya, Mysore, Bellary , Chamarajanagar, Ramanagara, Kodagu, Kolar, Chikaballapura, Hassan, and Chitradurga.
ಉತ್ತಮ ದರ್ಜೆಯ shoes ಗಳನ್ನೂ ಮತ್ತು ಬಾರಿ ರಿಯಾಯಿತಿ ದರದಲ್ಲಿ ಕೊಂಡುಕೊಳ್ಳಿ

Comments