Loading..!

ರಾಜ್ಯದ ವಿವಿಧ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಭೋದಕ ಹುದ್ದೆಗಳಿಗೆ ಅರ್ಜಿ ಅಹ್ವಾನ
Tags: Degree B.Ed
Published by: Surekha Halli | Date:June 4, 2020
not found
ರಾಜ್ಯದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ವಿಷಯಗಳ ಭೋದಕ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು ಈ ಕುರಿತು ಮಾಹಿತಿ ನಿಮಗಾಗಿ

* ಅಕ್ಕೂರು-ಹೊಸಹಳ್ಳಿ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು.
- ಅಭ್ಯರ್ಥಿಗಳು ಅರ್ಜಿಯ ಒಂದು ಪ್ರತಿಯನ್ನು ಕಾರ್ಯದರ್ಶಿಗಳು, ಅಕ್ಕೂರು-ಹೊಸಹಳ್ಳಿ ವಿದ್ಯಾಸಂಸ್ಥೆ,ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ ರವರಿಗೆ ಅರ್ಜಿ ಸಲ್ಲಿಸುವುದು. ಮತ್ತು ಇನ್ನೊಂದು ಪ್ರತಿಯನ್ನು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ರಾಮನಗರ ಜಿಲ್ಲೆ ರವರಿಗೆ ಅರ್ಜಿ ಸಲ್ಲಿಸುವುದು.
- ಅರ್ಜಿಯ ಜೊತೆಗೆ ಅರ್ಜಿ ಶುಲ್ಕವನ್ನು ಪರಿಶಿಷ್ಟ ಜಾತಿ ಅಭ್ಯರ್ಥಿಗಳು 500 /- ರೂಪಾಯಿಗಳನ್ನು ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳು 1000 /- ರೂಪಾಯಿಗಳನ್ನು ಬ್ಯಾಂಕ ಹುಂಡಿಯನ್ನು ಕಾರ್ಯದರ್ಶಿಗಳು, ಅಕ್ಕೂರು-ಹೊಸಹಳ್ಳಿ ವಿದ್ಯಾಸಂಸ್ಥೆ,ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ ಅವರ ಹೆಸರಿನಲ್ಲಿ ಲಗತ್ತಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-06-2020
- ಹುದ್ದೆಗಳ ವಿವರ :
- ಜೀವಶಾಸ್ತ್ರ
- ಸಮಾಜವಿಜ್ಞಾನ


* ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘ, ಇಂಡಿಯಲ್ಲಿ ಅನುದಾನಿತ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
- ಹುದ್ದೆಗಳ ವಿವರ
- ಸಹ ಶಿಕ್ಷಕರು
ಅಭ್ಯರ್ಥಿಗಳು ತಮ್ಮ ಎಲ್ಲ ಪ್ರಮಾಣ ಪಾತ್ರಗಳ ನಕಲುಗಳೊಂದಿಗೆ ಅಧ್ಯಕ್ಷರು / ಗೌರವ ಕಾರ್ಯದರ್ಶಿಗಳು ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘ, ಇಂಡಿ ಇವರ ಹೆಸರಿನಲ್ಲಿ 1000 /- ರೂಪಾಯಿಗಳನ್ನು ಡಿಡಿಯೊಂದಿಗೆ ಅರ್ಜಿಯನ್ನು ಅಧ್ಯಕ್ಷರು / ಗೌರವ ಕಾರ್ಯದರ್ಶಿಗಳು ಶ್ರೀ ಶಾಂತೇಶ್ವರ ವಿದ್ಯಾವರ್ಧಕ ಸಂಘ, ಮಿನಿ ವಿಧಾನಸೌಧದ ಎದುರಿಗೆ, ಪೋಸ್ಟ - ಇಂಡಿ,ಜಿ : ವಿಜಯಪುರ ಇವರಿಗೆ ತಲಪುವಂತೆ ಹಾಗೂ ಅರ್ಜಿಯ ಒಂದು ಪ್ರತಿಯನ್ನು ಮಾನ್ಯ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ವಿಜಯಪುರ ಇವರಿಗೆ ಕಳುಹಿಸುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23-06-2020


* ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿ, ಕಲಬುರಗಿಯಲ್ಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬೇಕು.
- ಅರ್ಜಿಯನ್ನು ಪ್ರದಾನ ಕಾರ್ಯದರ್ಶಿಗಳು, ಕರ್ನಾಟಕ ಪೀಪಲ್ಸ್ ಎಜುಕೇಷನ್ ಸಂಸ್ಥೆ, ಕಲಬುರುಗಿ ಇವರ ಹೆಸರಿನಲ್ಲಿ ಎಸ್.ಸಿ, ಎಸ್.ಟಿ. ಅಭ್ಯರ್ಥಿಗಳು ರೂ 500 /- ಗಳ ಡಿಡಿಯೊಂದಿಗೆ ಅರ್ಜಿ ಸಲ್ಲಿಸಬೇಕು. ಅರ್ಜಿಯ ಒಂದು ಪ್ರತಿಯನ್ನು ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಪ್ರಾದೇಶಿಕ ಕಚೇರಿ ಕಲಬುರುಗಿ ಇವರಿಗೆ ಸಲ್ಲಿಸಬೇಕು.
- ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 23-06-2020 ರ ಒಳಗಾಗಿ ಮಾನ್ಯ ಪ್ರದಾನ ಕಾರ್ಯದರ್ಶಿಗಳು, ಕರ್ನಾಟಕ ಪೀಪಲ್ಸ್ ಎಜುಕೇಷನ್ ಸೊಸೈಟಿ, ಡಾ.ಅಂಬೇಡ್ಕರ ಸಭಾಗೃಹ, ಪೊಲೀಸ್ ಮೈದಾನ ರಸ್ತೆ ಕಲಬುರುಗಿ ವಿಳಾಸಕ್ಕೆ ಸಲ್ಲಿಸಬೇಕು.

- ಈ ನೇಮಕಾತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಪತ್ರಿಕಾ ಪ್ರಕಟಣೆಗಳನ್ನು ಡೌನ್ಲೋಡ್ ಮಾಡಿಕೊಳ್ಳಿ.

Comments